ಕುಕ್ಕರ್ ಅಡುಗೆ ತಿಂದರೆ ಎಂಥ ಅನಾಹುತ ಆಗುತ್ತೆ?…. ಇವತ್ತಿನ ಸಂಚಿಕೆಯಲ್ಲಿ ಕುಕ್ಕರನ್ನು ಬಳಸುವುದರಿಂದ ಆಗುವಂತಹ ಹಾನಿಗಳ ಬಗ್ಗೆ ಹಾಗೂ ಆರೋಗ್ಯದ ಸಮಸ್ಯೆಗಳು ಈ ಕುರಿತಾದಂತಹ ಮಾಹಿತಿಯನ್ನು ನೋಡೋಣ, ಕುಕ್ಕರ್ ಎನ್ನುವುದು ಎಲ್ಲಿಂದ ಬಂದಿತು ಎಂದು,ಕುಕ್ಕರ್ ಬಳಸುವುದರಿಂದ ಆಹಾರದಲ್ಲಿ ಏನಾಗುತ್ತದೆ ಆಹಾರದ ಮೇಲೆ ಎಂತಹ ಪ್ರಭಾವವಾಗುತ್ತದೆ?ಮೊದಲನೆಯದಾಗಿ ಕುಕ್ಕರ್ ಎಲ್ಲಿಂದ ಬಂದಿದ್ದು ಎಂದು ನೋಡುವುದಾದರೆ ಪಾಶ್ಚಿಮಾತ್ಯ ದೇಶಗಳಿಂದ ಬಂದಿದ್ದು ಏಕೆಂದರೆ ಪಾಶ್ಚಿಮಾತ್ಯರು ಎಲ್ಲವನ್ನೂ ವೇಗವಾಗಿ ಮಾಡುತ್ತಾರೆ ಅವರು ಎಲ್ಲವನ್ನೂ ವೇಗವಾಗಿ ಮಾಡುವಂತಹ ಮನಸ್ಥಿತಿಯನ್ನು ಹೊಂದಿದವರು ಏಕೆಂದರೆ ಪಶ್ಚಿಮಾತ್ಯರಿಗೆ ಪುನರ್ಜನ್ಮದಲ್ಲಿ ವಿಶ್ವಾಸವಿಲ್ಲ ಜೀವನ ಒಂದೇ ಬಾರಿ ಸಿಕ್ಕಿದ್ದು ಈ ಜೀವನದಲ್ಲಿ ಏನು ಭೋಗ ಭಾಗ್ಯಗಳಿವೆ ಯಾವ ಭೋಗ ವಿಕಾರಗಳನ್ನ ಎಲ್ಲಾ ಭೋಗಗಳನ್ನ ಇದೇ ಜನುಮದಲ್ಲಿ ಅನುಭವಿಸಬೇಕು ಎನ್ನುವಂತಹ ಮನಸ್ಥಿತಿಯನ್ನು ಹೊಂದಿದವರು ಹಾಗಾಗಿ ಅವರೆಲ್ಲ ನೋಡಿದರೆ ರೋಬೋಟ್ ಹಾಗೆ ಇರುತ್ತಾರೆ ಎಲ್ಲಾ ಭೋಗಗಳನ್ನ ಅನುಭವಿಸುತ್ತಾರೆ ಹೆಚ್ಚು ಭೋಗ ಪ್ರಧಾನವಾಗಿರುವಂತಹ ಸಂಸ್ಕೃತಿ ಅದು ಅನುಭವಿಸಲು ಹೋಗಿ ಕೊನೆಗೆ ತಮ್ಮನ್ನ ತಾವೇ ನಾಶ ಮಾಡಿಕೊಳ್ಳುತ್ತಿದ್ದಾರೆ.
ಹೇಗೆ ರೇಷ್ಮೆ ಹುಳು ತನ್ನ ಸುತ್ತಲೂ ಹೆಣೆದುಕೊಂಡು ಒಳಗೆ ಹೋಗುತ್ತಾ ತಾನೆ ಸಾಯುತ್ತದೆಯೋ ಹಾಗೆ ಭೋಗ ಎನ್ನುವಂತಹ ಜೀವನವನ್ನ ನಮ್ಮ ಸುತ್ತಲೂ ಹೆಣೆದುಕೊಂಡು ಕೊನೆಗೆ ನಮ್ಮ ಆರೋಗ್ಯವನ್ನು ನಮ್ಮ ಆಯಸ್ಸನ್ನ ಕಳೆದುಕೊಳ್ಳುತ್ತಿದ್ದೇವೆ ಕುಕ್ಕರ್ ನಿಂದ ಸಹ ಹೀಗೆ ಆಗುತ್ತಿದೆ. ಕುಕ್ಕರ್ ಈ ಒಂದು ವ್ಯವಸ್ಥೆಯಲ್ಲಿ ಕುಕ್ಕರ್ ನಲ್ಲಿ ಆಹಾರವನ್ನು ಬೇಯಿಸಿದಾಗ ಏನಾಗುತ್ತದೆ ಎಂದರೆ ಆಹಾರ ವೇಗವಾಗಿ ಬೇಯುತ್ತದೆ ಆಹಾರ ವೇಗವಾಗಿ ಬೆಯ್ಯಲು ಅಲ್ಲಿ ಆಕ್ಸಿಜನ್ ಇರುವುದಿಲ್ಲ ಪ್ರಾಣ ವಾಯು ಇರುವುದಿಲ್ಲ ಪ್ರಾಣವಾಯುವಿನ ತುಂಬಾ ಕೊರತೆ ಇರುತ್ತದೆ ಹಾಗೆ ಅಲ್ಲಿ ಅಗ್ನಿ ಜಾಸ್ತಿ ಇರುತ್ತದೆ ಕೆಳಗೆ ಬೆಂಕಿ ಮೇಲೆ ಸ್ಟಿಮ್ ಆಕ್ಸಿಜನ್ ರಹಿತವಾಗಿ ಒತ್ತಡಕ್ಕೆ ಒಳಗಾಗಿ ಆಹಾರ ಮೆತ್ತಗಾಗುತ್ತದೆ ಇಲ್ಲಿ ಆಕ್ಸಿಜನ್ ಹೆಚ್ಚಾಗಿ ಇರುವುದಿಲ್ಲ ಏಕೆಂದರೆ ಮೇಲೆ ವಿಶಿಲನ್ನು ಹಾಕಿರುತ್ತೀರಾ ಆಕ್ಸಿಜನ್ ರಹಿತವಾಗಿ ಒತ್ತಡಕ್ಕೆ ಒಳಗಾಗಿ ಆಹಾರ ಮೆತ್ತಗಾಗುತ್ತದೆ ಅದು ಬೇಯುವುದಿಲ್ಲ ಆಯುರ್ವೇದ ಶಾಸ್ತ್ರದ ಪ್ರಕಾರ ನೋಡುವುದಾದರೆ ಆಹಾರ ತಯಾರಿಸುವ ಸಂದರ್ಭದಲ್ಲಿ ಅದಕ್ಕೆ ಪವನದ ಸ್ಪರ್ಶ ಸೂರ್ಯನ ಪ್ರಕಾಶ ತಾಗಬೇಕು ಎಂದು ಹೇಳುತ್ತಾರೆ ಕುಕ್ಕರ್ ನಲ್ಲಿ ಪವನದ ಸ್ಪರ್ಶವೂ ಆಗುವುದಿಲ್ಲ ಸೂರ್ಯನ ಪ್ರಕಾಶ ಮೊದಲೇ ತಾಗುವುದಿಲ್ಲ ಹೀಗಾದಾಗ ಅಲ್ಲಿರುವಂತಹ ಆಹಾರದ ಆಕಾರಗಳು ಏರುಪೇರು ಆಗುತ್ತದೆ.
ಹಾಗೆ ಅದರಲ್ಲಿರುವಂತಹ ಪೋಷಕಾಂಶಗಳು ನಾಶವಾಗುತ್ತವೆ ಇದನ್ನು ನಾನು ಹೇಳುತ್ತಿಲ್ಲ ಸಿ ಡಿ ಆರ್ ಐ ನಿಂದ ಸಂಶೋಧನೆ ಮಾಡಲಾಗಿರುವಂತಹ ರಿಪೋರ್ಟ್ ಹೇಳುತ್ತಿದೆ.ಸಿ ಡಿ ಆರ್ ಐ ಎಂದರೆ ಸೆಂಟ್ರಲ್ ಡ್ರಗ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಅದರ ರಿಪೋರ್ಟನ್ನು ನಾವು ನೋಡುವುದಾದರೆ ಕುಕ್ಕರ್ ನಲ್ಲಿ ಬೇಯಿಸಿರುವ ಬೇಳೆ ಎಲ್ಲಿ ಪೋಷಕಾಂಶಗಳು ಕೇವಲ ನಾಲ್ಕರಿಂದ ಐದು ಪರ್ಸೆಂಟ್ ಎಚ್ಚೆಂದರೆ 10% ಮಾತ್ರ ಇರುತ್ತದೆ ಎಂದು ಹೇಳುತ್ತಾರೆ ಹಾಗಾದರೆ 90% ಪೋಷಕಾಂಶಗಳು ನಾಶವಾಗಿ ಹೋಗುತ್ತದೆ ಅಂದರೆ ಪ್ರಕೃತಿಯಿಂದ ಬಂದಿರುವಂತಹ ಅದ್ಭುತ ಪೋಷಕಾಂಶಗಳು ಕುಕ್ಕರ್ ನಲ್ಲಿ ಸತ್ತು ಹೋಗುತ್ತದೆ ಆ ಸತ್ತಿರುವ ಆಹಾರವನ್ನು ಸೇವಿಸಿದಾಗ ನಾವು ಕೂಡ ಇರುತ್ತೇವೆ ಆದರೆ ಇದ್ದು ಸತ್ತ ಹಾಗೆ ಇರುತ್ತೇವೆ ನೂರಾರು ರೋಗಗಳು ತಾಮಸಿಕ ಸಮಸ್ಯೆಗಳು ಜಡತ್ವ ಶರೀರದಲ್ಲಿ ಮನೋವಿಕಾರ ಇಂದ್ರಿಯ ವಿಕಾರ ಕಾಮ ವಿಕಾರ ಇವೆಲ್ಲವೂ ಹೆಚ್ಚುತ್ತದೆ ಏಕೆಂದರೆ ಜೀವ ಶಕ್ತಿಯೇ ಕೊರತೆ ಉಂಟಾಯಿತು ಎಂದರೆ ಇವೆಲ್ಲವೂ ಹೆಚ್ಚಾಗಿ ಹಾಗುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ