ಧೀರೇಂದ್ರ ಗೋಪಾಲ್ ಅವರ ಜೀವನದ ಕೊನೆಯ ನೋವಿನ ದುರಂತ ಕಥೆ.ನಟ ಧೀರೇಂದ್ರ ಗೋಪಾಲ್ ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ರೀತಿಯ ಸಂಭಾಷಣ ಶೈಲಿ ಮತ್ತು ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.ಹಾಸ್ಯ ನಟರಾಗಿ ಪೋಷಕ ನಟರಾಗಿ ಕಳನಟರಾಗಿ ಕನ್ನಡ ಸಿನಿಮಾಗಳಲ್ಲಿ ಒಂದು ಕಾಲದಲ್ಲಿ ತುಂಬಾ ಬೇಡಿಕೆ ನಟರಾಗಿದ್ದರು.ಧೀರೇಂದ್ರ ಗೋಪಾಲ್ ರವರು 1940ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದ ಜೋಡಿ ಗುಬ್ಬಿ ಗ್ರಾಮದಲ್ಲಿ ಜನಿಸಿದರು.ಧೀರೇಂದ್ರ ಗೋಪಾಲ್ ರವರಿಗೆ ತಮ್ಮ ಶಾಲಾ ದಿನದಿಂದಲೇ ಅಭಿನಯದ ಮೇಲೆ ಹೆಚ್ಚು ಒಲವಿತ್ತು ಒಮ್ಮೆ ಧೀರೇಂದ್ರ ಗೋಪಾಲ್ ರವರು ಓದುತ್ತಿದ್ದ ಶಾಲೆಯಲ್ಲಿ ಒಂದು ನಾಟಕವನ್ನು ಆಯೋಜಿಸಲಾಗಿತ್ತು,ಶಾಲೆಗೆ ಮಕ್ಕಳ ಅಭಿನಯದ ಚತುರತೆಯನ್ನು ನೋಡಲು.ಆ ಶಾಲೆಯು ಗುಬ್ಬಿ ವೀರಣ್ಣ ರವರನ್ನು ಆಹ್ವಾನಿಸಿತ್ತು.ಧೀರೇಂದ್ರ ಗೋಪಾಲ್ ರವರ ಏಕಪಾತ್ರ ಅಭಿನಯವನ್ನು ಕಂಡ ಗುಬ್ಬಿ ವೀರಣ್ಣ ರವರು ತಮ್ಮ ನಾಟಕ ಸಂಘಕ್ಕೆ ಸೇರಲು ಹೇಳಿದರು. ಈ ಮೂಲಕ ರಂಗಭೂಮಿಗೆ ಪ್ರವೇಶಿಸಿದ ಧೀರೇಂದ್ರ ಗೋಪಾಲ್ ರವರು ಹಲವಾರು ನಾಟಕಗಳಲ್ಲಿ ನಟನೆ ಮಾಡಿ ರಂಗಭೂಮಿಯ ಹೆಸರಾಂತ ಕಲಾವಿದರಾದರು.ಅನಂತರ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ಧೀರೇಂದ್ರ ಗೋಪಾಲ್ ರವರು

ಪಡುವಾರಹಳ್ಳಿ ಪಾಂಡವರು ಸಿನಿಮಾದಲ್ಲಿ ಅದ್ಭುತವಾದ ನಟನೆಯನ್ನು ಮಾಡಿ ಹೆಚ್ಚು ಜನಪ್ರಿಯತೆಯನ್ನು ಪಡೆದರು.ನಂತರ ಧೀರೇಂದ್ರ ಗೋಪಾಲ್ ರವರು ಎಂದು ಹಿಂತಿರುಗಿ ನೋಡಲಿಲ್ಲ.ಧೀರೇಂದ್ರ ಗೋಪಾಲ್ ರವರು ಸುಮಾರು 180 ಕನ್ನಡ ಚಿತ್ರಗಳಲ್ಲಿ ನಟನೆ ಮಾಡಿದರು. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿರುತ್ತದೆ. ಇವರು ನಷ್ಟಕ್ಕೆ ಒಳಗಾದ ಕೆಲವು ರಂಗಭೂಮಿ ಮಾಲೀಕರಿಗೆ ಹಾಗೂ ಬಡ ಕಲಾವಿದರಿಗೆ ಧೀರೇಂದ್ರ ಗೋಪಾಲ್ ರವರು ಆರ್ಥಿಕ ಸಹಾಯವನ್ನು ಮಾಡಿದರು. ಕನ್ನಡ ಸಿನಿಮಾದಲ್ಲಿ ಖಳನಟರಿಗೆ ಶಾಪವೇನು ಎಂಬಂತೆ ತುಂಬಾ ಸಹೃದಯಿ ಹಾಗೂ ದಾನ ಧರ್ಮಗಳಿಗೆ ಹೆಸರಾಗಿದ್ದ ಧೀರೇಂದ್ರ ಗೋಪಾಲ್ ರವರು ತಮ್ಮ ಕೊನೆಯ ದಿನಗಳನ್ನು ಸಾಲದ ಶೂಲಕ್ಕೆ ಸಿಲುಕ್ಕಿದ್ದರೆಂದು ಸುದ್ದಿ ಆದರೆ ಕೊನೆಗಾಲದಲ್ಲಿ ದೇವರು ಅವರಿಗೆ ಒಳ್ಳೆಯದನ್ನು ಮಾಡಲಿಲ್ಲ.ಕೆಲವು ಕಾಲ ಅನಾರೋಗ್ಯದಿಂದ ಬಳಲಿದ ಧೀರೇಂದ್ರ ಗೋಪಾಲ್ ರವರು ಡಿಸೆಂಬರ್ 25 ,2000 ಇಸವಿಯಲ್ಲಿ ತಮ್ಮ 60ನೇ ವಯಸ್ಸಿಗೆ ಚಿರ ನಿದ್ರೆಗೆ ಜಾರಿದರು.ಆದರೆ ಇವರ ಕಲಾ ಸೇವೆ ಮತ್ತು ದಾನ ಧರ್ಮಗಳು ಎಂದಿಗೂ ಶಾಶ್ವತವಾಗಿರುತ್ತದೆ.ಈ ಕೆಳಗಿನ ವಿಡಿಯೋ ತಪ್ಪದೇ ನೋಡಿ.

WhatsApp Group Join Now
Telegram Group Join Now